Friday, October 9, 2015
ಭರಪುರ ಕಾಮಿಡಿಯ ಸಿಂಗ್ ಇಸ್ ಬ್ಲಿಂಗ್
ಆರಂಭದಿಂದ ಕೊನೆಯವರೆಗೂ ಭರಪುರ ಮನರಂಜನೆ ನೀಡುವ ಸಿಂಗ್ ಇಸ್ ಬ್ಲಿಂಗ್ ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದರೂ ತಾಯಿಯನ್ನು ಕಳೆದುಕೊಂಡ ಮಗಳ ಹುಡುಕಾಟದ ತೋಳಲಾಟ(ಯಾಮಿ ಜ್ಯಾಕ್ಸನ್-ಸಾರಾ ಪಾತ್ರ); ತಂದೆಯಿಂದ ಸದಾ ಬೈಸಿಕೊಳ್ಳುವ ಉಂಡಾಂಡಿ ಗುಂಡ ಮಗನ (ಅಕ್ಷಯಕುಮಾರ-ರಫ್ತಾರ ಸಿಂಗ್ ಪಾತ್ರ)ಪುಂಡಾಟಿಕೆ... ಡಾನ್ಗಳ ಅಬ್ಬರದ ಮಧ್ಯೆಯೂ ನಗೆ ಉಕ್ಕಿಸುವ ಸನ್ನಿವೇಶಗಳಿಂದಾಗಿ ಕೊಟ್ಟ ಹಣಕ್ಕೆ ಮೋಸವಿಲ್ಲದ ಚಿತ್ರ.
ಪ್ರಭುದೇವ ಮತ್ತು ಅಕ್ಷಯಕುಮಾರ ಕ್ಯಾಂಬಿನೇಷನ್ ಸಕ್ಸೆಸ್ ಯಾತ್ರೆ ಈ ಚಿತ್ರದಲ್ಲಿಯೂ ಮುಂದುವರೆದಿದೆ. ಅಕ್ಷಯಕುಮಾರ ಆ್ಯಕ್ಷನ್ಗಳಿಗೆ ಶಾಕ್ ನೀಡುವಂತೆ ನಟಿ ಯಾಮಿಯ ಫೈಟಿಂಗ್ ದೃಶ್ಯಗಳು ಚಿತ್ರದಲ್ಲಿವೆ. ಇಲ್ಲಿ ಅಕ್ಷಯಗೆ ಫೈಟಿಂಗ್ ರಿಸ್ಕ್ ಇಲ್ಲದ ಪುಕ್ಕಲ ಪಾತ್ರ.
ಹಿಂದಿ ಮತ್ತು ಪಂಜಾಬ್ ಭಾಷೆ ಬಿಟ್ಟರೇ ಬೇರೆ ಭಾಷೆಯೇ ಬರದ ಸರ್ದಾರ್(ರಫ್ತಾರ) ಪಂಜಾಬದಲ್ಲಿ ತಂದೆಯಿಂದ ಬೈಸಿಕೊಂಡು, ತಂದೆಯ ಸ್ನೇಹಿತನ ಬಳಿ ಕೆಲಸಕ್ಕಾಗಿ ಗೋವಾಗೆ ಬರುತ್ತಾನೆ. ಮೂಲ ಭಾರತೀಯಳಾದರೂ ಬೆಳದಿರುವುದೆಲ್ಲವೂ ರುಮೇನಿಯಾ ದೇಶದಲ್ಲಿಯೇ ಆಗಿದ್ದರಿಂದ ಇಂಗ್ಲಿಷ ಬಿಟ್ಟರೇ ಬೇರೆ ಭಾಷೆ ಬಾರದ ಸಾರಾ ಗೋವಾಗೆ ತನ್ನ ತಾಯಿಯನ್ನು ಹುಡುಕಿಕೊಂಡು ಬರುತ್ತಾರೆ.
ಆಗ ರಫ್ತಾರಗೆ ಸಾರಾ(ರುಮೇನಿಯಾ ಡಾನ್ ಮಗಳು)ಳನ್ನು ಕಾಯುವ ಕೆಲಸ. ಈ ಮಧ್ಯೆ ಇಂಗ್ಲಿಷ ಬಾರದ ಈತ ಹಿಂದಿ ಬಾರದ ಆಕೆಯೊಂದಿಗೆ ಸಂವಹನಕ್ಕಾಗಿ ಭಾಷಾಂತರಿಯನ್ನಾಗಿ ಇಮ್ಲಿ(ಲಾರಾ ದತ್ತ)ಯನ್ನು ನೇಮಿಸಿಕೊಳ್ಳುತ್ತಾರೆ. ಆಗ ಶುರುವಾಗುವ ನಗೆ ಸಭಾಂಷಣೆಗಳು ಹೊಟ್ಟೆ ನೋವು ತರಿಸದೇ ಇರದು. ಸಾರಾ ರಫ್ತಾರ ಬಗ್ಗೆ ಹೊಗಳಿ ಹೇಳುವ ಮಾತುಗಳನ್ನು ಇಮ್ಲಿ ಬೈದು ಭಾಷಾಂತರ ಮಾಡಿ ಹೇಳುತ್ತಾರೆ. ಬೈದು ಹೇಳಿದಾಗ, ಹೊಗಳಿದ್ದಾಳೆಂದು ಹೇಳುವ ಮೂಲಕ ರಫ್ತಾರನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾಳೆ.
ಸಾರಾಳ ಮೇಲೆ ರುಮೇನಿಯಾದ ಡಾನ್ ಒಬ್ಬ ಕಣ್ಣು ಹಾಕಿರುತ್ತಾನೆ. ಆತನ ಒತ್ತಡಕ್ಕೆ ಮಣಿದು ಅವನೊಂದಿಗೆ ಮದುವೆ ಮಾಡಿಕೊಡಲು ಸಾರಾ ತಂದೆ ಮುಂದಾಗುತ್ತಾನೆ. ಆದರೆ ಆಗ ರಫ್ತಾರ ರುಮೇನಿಯಾಗಿ ಹೋಗಿ ಆ ಡಾನ್ನನ್ನು ಮಣಿಸಿ ಸಾರಾಳನ್ನು ಪಡೆದುಕೊಂಡು ಹೇಗೆ ಬರುತ್ತಾನೆ ಎಂಬುದು ಟ್ವಿಸ್ಟ್.
ಇತ್ತೀಚೆಗೆ ಬಂದ್ ಅಕ್ಷಯನ ಎಂಟರ್ಟ್ರೇನೆಮಂಟ್ ಚಿತ್ರದಂತೆ ಇದೂ ಸಹ ಸಕತ್ ಆಗಿದೆ.
Subscribe to:
Post Comments (Atom)
ವರ್ಷದ ಕೊನೆ ದಿನ ಕರೆಂಟ್ ಕಟ್
ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...
-
೨೪ ಗಂಟೆಗಳ ನಿರಂತರ ಹೊನ್ನಾಟ. ಕಾಲಲ್ಲಿ ಚಪ್ಪಲಿಯಿಲ್ಲದೇ ಆಬಾಲವೃದ್ಧರಾದಿಯಾಗಿ ದೇವಿಯರನ್ನು ಹೊತ್ತು ಓಡಾಡಿದ ಭಕ್ತರ ದಂಡು. ಇದನ್ನೆಲ್ಲಾ ನೋಡಿ ಅಬ್ಬರದಿಂದ ಸುರಿದ ವರು...
-
ಬೆಳಗಾವಿಯಲ್ಲಿ ಸೋಮವಾರ ಆರ್.ಎಚ್. ಕುಲಕರ್ಣಿ ಸ್ಮಾರಕ ಟ್ರಸ್ಟ್ನ ಪತ್ರಿಕಾ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ವಿಶ್ವನಾಥ ಬಾಬುರಾವ್ ಪಾಟೀಲರಿಗೆ ಸಿ.ವಿ. ಬೆಳ್ಳಕ್ಕಿಯವರ...
-
ಅದ್ಯಾಕೋ ಏನೋ ಗೊತ್ತಿಲ್ಲ. ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರ ಹೊಸಾದು ಮಾಡ್ತೇನ್ ಅಂತ ಹೇಳಿ ಡಿಸಿ ಸಾಹೇಬ್ ಅದಕ್ಕ ಕೀಲಿ ಜಡೆದ್ಯಾಗಿನಿಂದ ಬೇರೆ ಕಡೆ ಎಲ್ಲಿಯೂ ಸಂಗೀ...
No comments:
Post a Comment