Friday, October 9, 2015
ಭರಪುರ ಕಾಮಿಡಿಯ ಸಿಂಗ್ ಇಸ್ ಬ್ಲಿಂಗ್
ಆರಂಭದಿಂದ ಕೊನೆಯವರೆಗೂ ಭರಪುರ ಮನರಂಜನೆ ನೀಡುವ ಸಿಂಗ್ ಇಸ್ ಬ್ಲಿಂಗ್ ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದರೂ ತಾಯಿಯನ್ನು ಕಳೆದುಕೊಂಡ ಮಗಳ ಹುಡುಕಾಟದ ತೋಳಲಾಟ(ಯಾಮಿ ಜ್ಯಾಕ್ಸನ್-ಸಾರಾ ಪಾತ್ರ); ತಂದೆಯಿಂದ ಸದಾ ಬೈಸಿಕೊಳ್ಳುವ ಉಂಡಾಂಡಿ ಗುಂಡ ಮಗನ (ಅಕ್ಷಯಕುಮಾರ-ರಫ್ತಾರ ಸಿಂಗ್ ಪಾತ್ರ)ಪುಂಡಾಟಿಕೆ... ಡಾನ್ಗಳ ಅಬ್ಬರದ ಮಧ್ಯೆಯೂ ನಗೆ ಉಕ್ಕಿಸುವ ಸನ್ನಿವೇಶಗಳಿಂದಾಗಿ ಕೊಟ್ಟ ಹಣಕ್ಕೆ ಮೋಸವಿಲ್ಲದ ಚಿತ್ರ.
ಪ್ರಭುದೇವ ಮತ್ತು ಅಕ್ಷಯಕುಮಾರ ಕ್ಯಾಂಬಿನೇಷನ್ ಸಕ್ಸೆಸ್ ಯಾತ್ರೆ ಈ ಚಿತ್ರದಲ್ಲಿಯೂ ಮುಂದುವರೆದಿದೆ. ಅಕ್ಷಯಕುಮಾರ ಆ್ಯಕ್ಷನ್ಗಳಿಗೆ ಶಾಕ್ ನೀಡುವಂತೆ ನಟಿ ಯಾಮಿಯ ಫೈಟಿಂಗ್ ದೃಶ್ಯಗಳು ಚಿತ್ರದಲ್ಲಿವೆ. ಇಲ್ಲಿ ಅಕ್ಷಯಗೆ ಫೈಟಿಂಗ್ ರಿಸ್ಕ್ ಇಲ್ಲದ ಪುಕ್ಕಲ ಪಾತ್ರ.
ಹಿಂದಿ ಮತ್ತು ಪಂಜಾಬ್ ಭಾಷೆ ಬಿಟ್ಟರೇ ಬೇರೆ ಭಾಷೆಯೇ ಬರದ ಸರ್ದಾರ್(ರಫ್ತಾರ) ಪಂಜಾಬದಲ್ಲಿ ತಂದೆಯಿಂದ ಬೈಸಿಕೊಂಡು, ತಂದೆಯ ಸ್ನೇಹಿತನ ಬಳಿ ಕೆಲಸಕ್ಕಾಗಿ ಗೋವಾಗೆ ಬರುತ್ತಾನೆ. ಮೂಲ ಭಾರತೀಯಳಾದರೂ ಬೆಳದಿರುವುದೆಲ್ಲವೂ ರುಮೇನಿಯಾ ದೇಶದಲ್ಲಿಯೇ ಆಗಿದ್ದರಿಂದ ಇಂಗ್ಲಿಷ ಬಿಟ್ಟರೇ ಬೇರೆ ಭಾಷೆ ಬಾರದ ಸಾರಾ ಗೋವಾಗೆ ತನ್ನ ತಾಯಿಯನ್ನು ಹುಡುಕಿಕೊಂಡು ಬರುತ್ತಾರೆ.
ಆಗ ರಫ್ತಾರಗೆ ಸಾರಾ(ರುಮೇನಿಯಾ ಡಾನ್ ಮಗಳು)ಳನ್ನು ಕಾಯುವ ಕೆಲಸ. ಈ ಮಧ್ಯೆ ಇಂಗ್ಲಿಷ ಬಾರದ ಈತ ಹಿಂದಿ ಬಾರದ ಆಕೆಯೊಂದಿಗೆ ಸಂವಹನಕ್ಕಾಗಿ ಭಾಷಾಂತರಿಯನ್ನಾಗಿ ಇಮ್ಲಿ(ಲಾರಾ ದತ್ತ)ಯನ್ನು ನೇಮಿಸಿಕೊಳ್ಳುತ್ತಾರೆ. ಆಗ ಶುರುವಾಗುವ ನಗೆ ಸಭಾಂಷಣೆಗಳು ಹೊಟ್ಟೆ ನೋವು ತರಿಸದೇ ಇರದು. ಸಾರಾ ರಫ್ತಾರ ಬಗ್ಗೆ ಹೊಗಳಿ ಹೇಳುವ ಮಾತುಗಳನ್ನು ಇಮ್ಲಿ ಬೈದು ಭಾಷಾಂತರ ಮಾಡಿ ಹೇಳುತ್ತಾರೆ. ಬೈದು ಹೇಳಿದಾಗ, ಹೊಗಳಿದ್ದಾಳೆಂದು ಹೇಳುವ ಮೂಲಕ ರಫ್ತಾರನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾಳೆ.
ಸಾರಾಳ ಮೇಲೆ ರುಮೇನಿಯಾದ ಡಾನ್ ಒಬ್ಬ ಕಣ್ಣು ಹಾಕಿರುತ್ತಾನೆ. ಆತನ ಒತ್ತಡಕ್ಕೆ ಮಣಿದು ಅವನೊಂದಿಗೆ ಮದುವೆ ಮಾಡಿಕೊಡಲು ಸಾರಾ ತಂದೆ ಮುಂದಾಗುತ್ತಾನೆ. ಆದರೆ ಆಗ ರಫ್ತಾರ ರುಮೇನಿಯಾಗಿ ಹೋಗಿ ಆ ಡಾನ್ನನ್ನು ಮಣಿಸಿ ಸಾರಾಳನ್ನು ಪಡೆದುಕೊಂಡು ಹೇಗೆ ಬರುತ್ತಾನೆ ಎಂಬುದು ಟ್ವಿಸ್ಟ್.
ಇತ್ತೀಚೆಗೆ ಬಂದ್ ಅಕ್ಷಯನ ಎಂಟರ್ಟ್ರೇನೆಮಂಟ್ ಚಿತ್ರದಂತೆ ಇದೂ ಸಹ ಸಕತ್ ಆಗಿದೆ.
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
-
ಸೈರಾ ನರಸಿಂಹ ರೆಡ್ಡಿ ಸಿನಿಮಾ ಮೂಲ ತೆಲುಗು ಆಗಿದ್ರು ಕೂಡ ಕನ್ನಡದ ಡಬ್ಬಿಂಗ್ ತುಂಬಾ ಪರಿಪೂರ್ಣತೆ ಹೊಂದಿದೆ. ಮುಖ್ಯವಾಗಿ ಕಲಾವಿದರ ನಟನೆ, ತುಟಿಗಳ ಚಲನೆ ಮತ್ತು ಸಂಭಾಷಣೆ...
-
ಗೂಗ್ಲಿ ಚಿತ್ರದಲ್ಲಿ ಏನೆಂದರೆ ಏನೂ ಇಲ್ಲ. ನೆನಪಿಟ್ಟುಕೊಳ್ಳಬಹುದಾದ ಕಥೆಯಿಲ್ಲ. ಆದರೂ ಚಿತ್ರ ನೋಡಿದ ಬಳಿಕ ಕಾಡುತ್ತದೆ. ಮತ್ತೊಮ್ಮೆ ಹೋಗಿ ನೋಡಬೇಕು ಅನಿಸುತ್ತದೆ. ಅದಕ...
-
ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದುಕೊಂಡು ಸುಮಾರು ನೂರಾರು ಸಾಹಿತಿಗಳು ಕೆಲ ತಿಂಗಳ ಹಿಂದೆ ತಾವು ಪಡೆದುಕೊಂಡಿದ್ದ ಪ್ರಶಸ್ತಿಗಳನ್ನು ವಾಪಸ್ ಕೊಟ್ಟಿದ್ದೆ ಕ...
No comments:
Post a Comment