ಬಾಲ್ಯದಿಂದಲೂ ನನ್ನಲ್ಲಿದ್ದ ಸಿನಿಮಾ ಹುಚ್ಚು 6ನೇ ತರಗತಿಯಲ್ಲಿದ್ದಾಗೊಮ್ಮೆ ಪೇಚಿಗೆ ಸಿಲುಕಿಸಿತ್ತು. ಶಾಲೆಯಲ್ಲಿ ಅಪರೂಪಕ್ಕೊಮ್ಮೆ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿನ ಕಪಾಟು ತೆಗೆದು(ಆ ಪುಟ್ಟ ಕಪಾಟೇ ಹಳ್ಳಿ ಶಾಲೆಗಳ ಪಾಲಿಗೆ ಗ್ರಂಥಾಲಯ) ಪುಸ್ತಕಗಳನ್ನು ಓದಲು ಕೊಡುತ್ತಿದ್ದರು.
ನಮ್ಮ ಕೆ.ಎಂ. ಹಾವಣ್ಣವರ ಗುರುಗಳು ಪ್ರಭಾರ ಮುಖ್ಯೋಪಾಧ್ಯಾಯರಾಗಿದ್ದಾಗ ಅದೊಂದು ಶನಿವಾರ ಆ ಕಪಾಟು ಓಪನ್ ಮಾಡಿಸಿ ಪುಸ್ತಕಗಳನ್ನು ಟೇಬಲ್ ಮೇಲೆ ಹರವಿಕೊಂಡಿದ್ದರು. ಆಗ ನನ್ನ ಕಣ್ಣಿಗೆ ಬಿದ್ದ ಪುಸ್ತಕ ‘ರಣಧೀರ’;
ಆದಾಗಲೇ ನಮ್ಮೂರಲ್ಲಿ ಕೆಲ ಯುವಕ ಸಂಘದವರು ಆಗಾಗ ವಿಸಿಪಿ ತರಿಸಿ ತೋರಿಸುತ್ತಿದ್ದ ರಣಧೀರವನ್ನು 50 ಪೈಸೆ ಕೊಟ್ಟು ತುಂಬಾ ಸಲ ನೋಡಿ ಆಗಿತ್ತು. ಹೀಗಾಗಿ ಇದು ಅದೇ ರಣಧೀರನ ಪುಸ್ತಕ ಎಂದುಕೊಂಡು ಗಬಕ್ಕಂತ(ಛಕ್ಕನೆ) ತಗೊಂಡ ಬಿಟ್ಟೆ(ಕವರ್ ಪೇಜ್ ಹರಿದು ಹೋಗಿತ್ತು...!)
ರಣಧೀರ ಪುಸ್ತಕವನ್ನು ಕೈ ಚೀಲ(ಪ್ಲಾಸ್ಟಿಕ್ನ ಸಿಮೆಂಟ್ ಚೀಲದಿಂದ ಮಾಡಿದ್ದ ಕೈ ಚೀಲವೇ ನಮ್ಮ ಸ್ಕೂಲ್ಬ್ಯಾಗ್)ದಲ್ಲಿ ಹಾಕಿಕೊಂಡು ಏನೇನೋ ಕಲ್ಪಿಸಿಕೊಂಡು ಮನಗೆ ಬಂದವನೇ, ಗಡಬಡಿಯಿಂದ(ಅವಸರವಸರವಾಗಿ) ಊಟ ಮಾಡಿ, ಪುಸ್ತಕ ತೆಗೆದು ನೋಡಿದ್ರೆ ಅದು ರಾಜಾ ರಣಧೀರ ಕಂಠೀರವ ಕುರಿತ ಪುಟಾಣಿ ಕಾದಂಬರಿಯಾಗಿತ್ತು...!
Monday, October 26, 2015
ಸಿನಿಮಾ ಹುಚ್ಚು ಮತ್ತು ರಣಧೀರ ಕಾದಂಬರಿ...!
ಬಾಲ್ಯದಿಂದಲೂ ನನ್ನಲ್ಲಿದ್ದ ಸಿನಿಮಾ ಹುಚ್ಚು 6ನೇ ತರಗತಿಯಲ್ಲಿದ್ದಾಗೊಮ್ಮೆ ಪೇಚಿಗೆ ಸಿಲುಕಿಸಿತ್ತು. ಶಾಲೆಯಲ್ಲಿ ಅಪರೂಪಕ್ಕೊಮ್ಮೆ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿನ ಕಪಾಟು ತೆಗೆದು(ಆ ಪುಟ್ಟ ಕಪಾಟೇ ಹಳ್ಳಿ ಶಾಲೆಗಳ ಪಾಲಿಗೆ ಗ್ರಂಥಾಲಯ) ಪುಸ್ತಕಗಳನ್ನು ಓದಲು ಕೊಡುತ್ತಿದ್ದರು.
ನಮ್ಮ ಕೆ.ಎಂ. ಹಾವಣ್ಣವರ ಗುರುಗಳು ಪ್ರಭಾರ ಮುಖ್ಯೋಪಾಧ್ಯಾಯರಾಗಿದ್ದಾಗ ಅದೊಂದು ಶನಿವಾರ ಆ ಕಪಾಟು ಓಪನ್ ಮಾಡಿಸಿ ಪುಸ್ತಕಗಳನ್ನು ಟೇಬಲ್ ಮೇಲೆ ಹರವಿಕೊಂಡಿದ್ದರು. ಆಗ ನನ್ನ ಕಣ್ಣಿಗೆ ಬಿದ್ದ ಪುಸ್ತಕ ‘ರಣಧೀರ’;
ಆದಾಗಲೇ ನಮ್ಮೂರಲ್ಲಿ ಕೆಲ ಯುವಕ ಸಂಘದವರು ಆಗಾಗ ವಿಸಿಪಿ ತರಿಸಿ ತೋರಿಸುತ್ತಿದ್ದ ರಣಧೀರವನ್ನು 50 ಪೈಸೆ ಕೊಟ್ಟು ತುಂಬಾ ಸಲ ನೋಡಿ ಆಗಿತ್ತು. ಹೀಗಾಗಿ ಇದು ಅದೇ ರಣಧೀರನ ಪುಸ್ತಕ ಎಂದುಕೊಂಡು ಗಬಕ್ಕಂತ(ಛಕ್ಕನೆ) ತಗೊಂಡ ಬಿಟ್ಟೆ(ಕವರ್ ಪೇಜ್ ಹರಿದು ಹೋಗಿತ್ತು...!)
ರಣಧೀರ ಪುಸ್ತಕವನ್ನು ಕೈ ಚೀಲ(ಪ್ಲಾಸ್ಟಿಕ್ನ ಸಿಮೆಂಟ್ ಚೀಲದಿಂದ ಮಾಡಿದ್ದ ಕೈ ಚೀಲವೇ ನಮ್ಮ ಸ್ಕೂಲ್ಬ್ಯಾಗ್)ದಲ್ಲಿ ಹಾಕಿಕೊಂಡು ಏನೇನೋ ಕಲ್ಪಿಸಿಕೊಂಡು ಮನಗೆ ಬಂದವನೇ, ಗಡಬಡಿಯಿಂದ(ಅವಸರವಸರವಾಗಿ) ಊಟ ಮಾಡಿ, ಪುಸ್ತಕ ತೆಗೆದು ನೋಡಿದ್ರೆ ಅದು ರಾಜಾ ರಣಧೀರ ಕಂಠೀರವ ಕುರಿತ ಪುಟಾಣಿ ಕಾದಂಬರಿಯಾಗಿತ್ತು...!
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
-
ನಾನು ಯಾವತ್ತೂ ಚಂದನೆಯ ಹುಡುಗಿಯ ಶೋಧನೆಯಲ್ಲಿ ಇರುತ್ತೇವೆ. ತುಂಬಾ ಸೌಮ್ಯ, ಪ್ಯಾಷನ್ ಗಂಧ ಗಾಳಿಯೂ ಗೊತ್ತಿಲ್ಲ. ಉತ್ತಮ ಗುಣದ ಹುಡುಗಿಯ ಯಾವುದೇ ಜಾತಿಯಲ್ಲಿದ್ದರೂ ಮದುವೆಯ...
-
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
No comments:
Post a Comment